Dr. Dhananjaya Sarji

ಜನಪರ - ಜೀವಪರ

Kannada Rajyostva

ಶಿವಮೊಗ್ಗ ಸರ್ಜಿ ಫೌಂಡೇಶನ್‌ ಹಾಗೂ ಜಿಲ್ಲಾ ಸಹ್ಯಾದ್ರಿ ಕನ್ನಡ ಸಿರಿ ಬಳಗದ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್‌ ಭವನದ ಎದುರು ನಡೆದ ಮಂಗಳವಾರ ಕನ್ನಡ ರಾಜ್ಯೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಸಾಧಕರು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕರಾದ ಚಂದ್ರಕಾಂತ್‌, ಸಾಹಿತಿ ಎಂ.ಎನ್‌.ಸುಂದರರಾಜ್‌, ಸಮಾಜ ಸೇವಕ ವಿ.ಮೂರ್ತಿ ಹಾಗೂ ರೋಟರಿ ಚಿತಾಗಾರದ ಸೇವಕಿ ಅನಸೂಯಮ್ಮ ಅವರನ್ನು ಬಸವಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಸನ್ಮಾನಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಎಚ್‌.ಸಿ. ಯೋಗೀಶ್‌, ಮೀನಾಕ್ಷಿ ಗೋವಿಂದರಾಜು, ಉದ್ಯಮಿ ಟಿ.ಆರ್‌.ಅಶ್ವತ್ಥನಾರಾಣ ಶೆಟ್ಟಿ ಹಾಗೂ ಸಹ್ಯಾದ್ರಿ ಕನ್ನಡ ಸಿರಿ ಬಳಗದ ಅಧ್ಯಕ್ಷ ಎಂ. ಕುಮಾರ್‌, ವಸಂತ್‌, ಮತ್ತಿತರರು ಭಾಗವಹಿಸಿದ್ದರು